ನಮ್ಮ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಘಟಕವು ಹಮ್ಮಿಕೊಂಡಿರುವ 2024 ನೇ ಸಾಲಿನ
-: ಸ್ವಾಭಿಮಾನ ಪ್ರತಿಭಾ ಪುರಸ್ಕಾರವನ್ನು ನೀಡುವ ಬಗ್ಗೆ ನಿಬಂಧನೆಗಳು :-
-
ಈ ಪ್ರತಿಭಾ ಪುರಸ್ಕಾರವು ಅರ್ಜಿಯಲ್ಲಿ ನಮೂದಿಸಿರುವ ಶೈಕ್ಷಣಿಕ ವರ್ಷದಲ್ಲಿ ಪಾಸಾಗಿರುವ ವಿದ್ಯಾಥಿಗಳಿಗೆ ಮಾತ್ರ ಕೊಡಲಾಗುವುದು.
-
ಈ ಪ್ರತಿಭಾ ಪುರಸ್ಕಾರವನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮಾತ್ರ ಕೊಡಲಾಗುವುದು.
-
ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ವಿದ್ಯಾರ್ಥಿ/ ನಿಯು ಓದಿದ ಶಾಲೆ ಅಥವಾ ಕಾಲೇಜಿನಿಂದ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಹಾಗೂ ಇತ್ತೀಚಿನ ಎರಡು ಭಾವ ಚಿತ್ರ ಲಗತ್ತಿಸಿ.
-
ಪ್ರತಿ ವಿಷಯದಲ್ಲೂ ಶೇಕಡಾ 90% ಕ್ಕಿಂತ ಹೆಚ್ಚು ಅಂಕ ಗಳಿಸಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
-
ಸ್ವೀಕೃತವಾದ ಅರ್ಜಿಗಳಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ. ಯ ಹಾಗೂ ಪಿ.ಯು.ಸಿ.ಯ ತಲಾ ಹತ್ತು ವಿದ್ಯಾರ್ಥಿಗಳಿಗೆ ಮಾತ್ರ ಪುರಸ್ಕಾರ ನೀಡಲಾಗುವುದು.
-
ಪುರಸ್ಕಾರ ನೀಡಿದ ನಂತರ ತಾವು ನೀಡಿದ ಯಾವುದೇ ಮಾಹಿತಿಯ ತಪ್ಪು ಅಥವಾ ಸುಳ್ಳು ಎಂದು ಕಂಡುಬಂದಲ್ಲಿ ಅಂತ ಪುರಸ್ಕಾರವನ್ನು ಹಿಂತೆಗೆದುಕೊಳ್ಳುವ ಅಧಿಕಾರವನ್ನು ದಾವಣಗೆರೆ ಜಿಲ್ಲಾ ಘಟಕವು ಹೊಂದಿರುತ್ತದೆ.
-
ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಮಾತ್ರ ದೂರವಾಣಿ / ಪತ್ರ / ಆಯ್ದ ಸ್ಥಳೀಯ ದಿನಪತ್ರಿಕೆಗಳ ಮತ್ತು ತಮ್ಮ ವಿಳಾಸಕ್ಕೆ ಅಂಚೆ ಮುಖಾಂತರ ಪುರಸ್ಕಾರ ವಿತರಣೆಯ ಸಮಾರಂಭದ ದಿನಾಂಕ ಮತ್ತು ಸ್ಥಳವನ್ನು ತಿಳಿಸಲಾಗುವುದು. ಆ ದಿವಸ ತಾವುಗಳು ತಂದೆ, ತಾಯಿ ಅಥವಾ ಪೋಷಕರ ಜೊತೆಗೂಡಿ ಬಂದು ಪುರಸ್ಕಾರ ಪಡೆಯಬೇಕು.
-
ಭರ್ತಿಮಾಡಿದ ಅರ್ಜಿಯನ್ನು ನಮ್ಮ ಸಮಾಜದ ದಾವಣಗೆರೆ ಜಿಲ್ಲಾ ಘಟಕದ ಕಛೇರಿಗೆ ದಿನಾಂಕ 25/05/2024 ರ ರೊಳಗಾಗಿ ತಲುಪಿಸಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ಟೀಕರಿಸಲಾಗುವುದಿಲ್ಲ.
-
ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ಅಂತಿಮ ನಿರ್ಧಾರವು ಜಿಲ್ಲಾ ಘಟಕದ್ದಾಗಿರುತ್ತದೆ.
-
ಅರ್ಜಿಯ ಶುಲ್ಕ 100/- ವನ್ನು ಕಚೇರಿಯಲ್ಲಿ ಪಾವತಿ ಮಾಡಿ ರಶೀದಿಯನ್ನು ಪಡೆಯಬೇಕು
-
ಕಾರ್ಯಕ್ರಮ ದಿನಾಂಕ ಮತ್ತು ಸಮಯವನ್ನು ತಮಗೆ ತಿಳಿಸುತ್ತೇವೆ, ಹಾಗೂ ತಮ್ಮ ವಿಳಾಸಕ್ಕೆ ಆಮಂತ್ರಣ ಕಳುಸುತ್ತೇವೆ.
-
ವಿದ್ಯಾರ್ಥಿಯ ತಂದೆ/ ತಾಯಿ ಅಥವಾ ಪೋಷಕರು ಪಂಚಮಸಾಲಿ ಸಮಾಜದ ಪಂಚವಾಣಿ ಮಾಸ ಪತ್ರಿಕೆಯ ಚಂದಾದರರಾಗಿರಬೇಕು. ಕಡ್ಡಾಯವಾಗಿ ಪತ್ರಿಕೆಯ ರಶೀಧಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೊದಿಸಬೇಕು. ಚಂದಾದರರಾಗಿರುವುದಿಲ್ಲಯAದರೆ ತಾವುಗಳು ತಮ್ಮ ತಾಲ್ಲೂಕ್ ಘಟಕದ ಅಧ್ಯಕ್ಷರು/ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳನ್ನು ಸಂಪರ್ಕಿಸಿರಿ.
-
ಪ್ರತಿಭಾ ಪುರಸ್ಕಾರಕ್ಕೆ ಈ ತಾಲ್ಲೂಕುಗಳು ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ದಾವಣಗೆರೆ, ಮತ್ತು ದಾವಣಗೆರೆ ನಗರ, ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ಕಛೇರಿಯ ದೂ: 08192 / 222008
https://panchamasalibandhavya.com/index.php/success-stories/14-matrimonial-stories