ದಿನಾಂಕ 14-03-2021ರಂದು ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರನ್ನು ದೆಹಲಿಯ ಉಪರಾಷ್ಟ್ರಪತಿಯವರ ನಿವಾಸದಲ್ಲಿ ಭೇಟಿ ಆದೆವು.ಅವರ ಇಂದಿನ ಭೇಟಿ ಬಹಳ ಪ್ರಫುಲ್ಲದಾಯಕವಾಗಿತ್ತು. ನಮ್ಮನ್ನ ನೋಡಿದ ಕೂಡಲೇ ಅವರು ಬಹಳ ಖುಷಿ ಪಟ್ಟರು.ಕೆಲವು ವರ್ಷಗಳ ಹಿಂದೆ ಅವರನ್ನು ಬೇಟಿಯಾದ ಸಂಧರ್ಭವನ್ನು ಮತ್ತು ಕೆಲವು ದಿನಗಳ ಹಿಂದೆ ನಿಮ್ಮ ಜೊತೆ ಮಾತನಾಡಿರುವುದನ್ನು ಮೆಲುಕು ಹಾಕಿದರು.ನೀವು ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆಸಿದ್ಧಿ ಹಾಗೂ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾಗಿದ್ದನ್ನು ಬಗ್ಗೆ ಕೇಳಿದ್ದೇನೆ.ತುಂಬಾ ಸಂತಸ ಅಂತ ಪ್ರೀತಿಯಿಂದ ಮಾತಾಡಿದರು. ಯೋಗ, ಆಧ್ಯಾತ್ಮದ ಬಗ್ಗೆ ಉಪರಾಷ್ಟ್ರಪತಿಗಳಿಗೆ ಅತೀವ ಜ್ಞಾನವಿದೆ. ಆ ಕುರಿತು ನಮ್ಮ ಜೊತೆ ವಿಸ್ತೃತವಾಗಿ ಚರ್ಚಿಸಿದರು. ಜೂನ್ ೨೧ಕ್ಕೆ ಜಗತ್ತಿನೆಲ್ಲೆಡೆ ಆಚರಿಸುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತೂ ಮಾತನಾಡಿದರು. ನಮ್ಮೊಂದಿಗೆ ನವದೆಹಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ನಿರ್ದೇಶಕರಾದ ಶ್ರೀ ಡಾ.ಈಶ್ವರ ಬಸವರೆಡ್ಡಿ ಉಪಸ್ಥಿತರಿದ್ದರು.
ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರು ಸರಳ- ಸಜ್ಜನರು. ರಾಜಕೀಯ ಮುತ್ಸದ್ಧಿಗಳು. ನಮ್ಮ ಪಕ್ಕದ ಆಂಧ್ರಪ್ರದೇಶದವರು. ಕನ್ನಡಿಗರನ್ನು ಕಂಡರೆ ಅಪಾರ ಪ್ರೀತಿ ಗೌರವ. ಅವರಿಗೆ ಹರಿಹರಾದಿ ಶರಣರು ಹೆಚ್ಚಿನ ಆರೋಗ್ಯ ಭಾಗ್ಯ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.