email: [email protected] | phone: (08192) 222008 / 224914 | Sri Peetha: 94819 27666

ದಿನಾಂಕ : 29-12-2023

ಇವರಿಗೆ,

ಸಂಪಾದಕರು

ಕನ್ನಡ ದಿನಪತ್ರಿಕೆ ಹಾಗೂ  ದೃಶ್ಯ ಮಾಧ್ಯಮ. 



ಮಾನ್ಯರೆ, 

ದಿನಾಂಕ 26-12-2023ರಂದು ನಡೆದ ಪಂಚಮಸಾಲಿ ಜಗದ್ಗುರು ಪೀಠದ ಟ್ರಸ್ಟಿನ ಸಭೆಯಲ್ಲಿ  ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮೀಜಿಯವರ ಸಾನಿಧ್ಯದಲ್ಲಿ ಹಾಗೂ ಶ್ರೀಪೀಠದ ಪ್ರಧಾನ  ಧರ್ಮದರ್ಶಿಗಳಾದ ಶ್ರೀ ಬಿ. ಸಿ. ಉಮಪತಿಯವರ ಅಧ್ಯಕ್ಷತೆಯಲ್ಲಿ ಮತ್ತು ಶ್ರೀ ಪೀಠದ ಆಡಳಿತಾಧಿಕಾರಿಗಳಾದ ಶ್ರೀ ಎಚ್.ಪಿ. ರಾಜಕುಮಾರರವರ ನೇತೃತ್ವದಲ್ಲಿ  ಶ್ರೀ ಪೀಠದ . ಎಲ್ಲಾ  ಧರ್ಮದರ್ಶಿಗಳು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳ ನಡೆದ ಸಭೆಯಲ್ಲಿ  ಈ ಬಾರಿ ರಾಜ್ಯದಲ್ಲಿ ಬರಗಾಲ ಇರುವುದು ಹಾಗೂ ನಮ್ಮ ಸಮಾಜವು ಕೃಷಿ ಪ್ರಧಾನ ರೈತಾಪಿ ವರ್ಗ ಆಗಿರುವುದರಿಂದ  ಜನರು ಸಂಕಷ್ಟದಲ್ಲಿ ಇದ್ದಾರೆ ಆದ್ದರಿಂದ “ಹರ ಜಾತ್ರಾ ಮಹೋತ್ಸವ”ವನ್ನು ಈ ವರ್ಷ ಅತ್ಯಂತ ಸರಳರೀತಿಯಲ್ಲಿ 2024 ಜನವರಿ 14 ಮತ್ತು 15 ರಂದು “ಹರ ಜಾತ್ರಾ ಮಹೋತ್ಸವ”ವನ್ನು ಶ್ರೀಪೀಠದಲ್ಲಿ ಸರಳವಾಗಿ  ಧಾರ್ಮಿಕ ರೂಪದಲ್ಲಿ ಆಚರಿಸಲು ತೀರ್ಮಾನಿಸಲಾಯಿತು.  ಸರಳ “ಹರ ಜಾತ್ರಾ ಮಹೋತ್ಸವದ ಕಾರ್ಯಕ್ರಮ ವಿವರಗಳನ್ನು ಮುಂದಿನ ದಿನಗಳಲ್ಲಿ ಸಮಾಜ ಬಾಂಧವರಿಗೆ ತಿಳಿಸುತ್ತೇವೆ ಎಂದು ಈ ಮೂಲಕ ಶ್ರೀಪೀಠದ ಆಡಳಿತಾಧಿಕಾರಿಗಳಾದ ಶ್ರೀ ಎಚ್ ಪಿ  ರಾಜಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

 

(ಈ ಸುದ್ದಿಯನ್ನು ತಮ್ಮ ಪತ್ರಿಕೆಗಳಲ್ಲಿ ರಾಜ್ಯದ ಸುದ್ದಿಯಾಗಿ ಪ್ರಕಟವಾಗುವಂತೆ ಮಾಡಲು ಈ ಮೂಲಕ ವಿನಂತಿ) 

ವಂದನೆಗಳೊಂದಿಗೆ

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪರವಾಗಿ


ಶ್ರೀ ಎಚ್. ಪಿ. ರಾಜಕುಮಾರ್ 

ಶ್ರೀಪೀಠದ ಆಡಳಿತಾಧಿಕಾರಿಗಳು

ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾದ್ಯಕ್ಷರಾದ ಶ್ರೀ ಜಿ ಪಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕಾಧ್ಯಕ್ಷರ ಸಮ್ಮುಖದಲ್ಲಿ ಸಂಘಟನಾತ್ಮಕ ಸಭೆಯ ಯಶಸ್ವಿಯಾಗಿ ಜರುಗಿತು.
ಈ ಸಂಧರ್ಭದಲ್ಲಿ ಪ್ರಧಾನ ಧರ್ಮದರ್ಶಿ ಶ್ರೀ ಬಿ ಸಿ ಉಮಾಪತಿಯವರು,ಶ್ರೀ ಬಾವಿ ಬೆಟ್ಟಪ್ಪನವರು,ಶ್ರೀ ಬಸವರಾಜ್ ದಿಂಡೂರುರವರು ಹಾಗೂ ಶ್ರೀಪೀಠದ ಧರ್ಮದರ್ಶಿಗಳು,ಆಡಳಿತಾಧಿಕಾರಿ ಶ್ರೀ ಡಾ.ರಾಜಕುಮಾರ ಅವರು,ಸಮುದಾಯದ ಹಿರಿಯರು,ಮಹಿಳಾ ಘಟಕದವರು,ಯುವ ಘಟಕದವರು ಉಪಸ್ಥಿತರಿದ್ದರು.

ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಜಿಲ್ಲಾ ಯುವ ಘಟಕದ ನೇತೃತ್ವದಲ್ಲಿ ಹರ ಸೇವಾ ಸಂಸ್ಥೆ ಹಾಗೂ ಜಿಲ್ಲೆಯ ಎಲ್ಲಾ ಘಟಕಗಳ ಸಹಯೋಗದಲ್ಲಿ ದಾವಣಗೆರೆಯಲ್ಲಿಂದು ಸಮಾಜದ ಖಚೇರಿಯಲ್ಲಿ ಕನ್ನಡ ರಾಜ್ಯೋತ್ಸವ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಆಚರಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಬೆಳಕು ಅಕಾಡೆಮಿಯ ಸಂಸ್ಥಾಪಕಿ ಅಶ್ವಿನಿ ಅಂಗಡಿಯವರು ಮಾತನಾಡಿ ತಾಯಂದಿರು ಮಕ್ಕಳನ್ನು ಜರಿಯದೆ  ಪ್ರೋತ್ಸಾಹಿಸುವ ಮೂಲಕ ಅವರನ್ನು ಸಾಧನೆಗೆ ಹುರಿದುಂಬಿಸಬೇಕು. ಮಕ್ಕಳಿಗೆ ಋಣಾತ್ಮಕ ವಿಚಾರಗಳ ಬಗ್ಗೆ ಹೇಳದೆ ಧನಾತ್ಮಕವಾದ ವಿಷಯಗಳನ್ನು ಹೇಳಬೇಕು. ಬೇರೆಯವರನ್ನು ಹೋಲಿಕೆ ಮಾಡಿ ಜರಿಯದೆ ಅವರು ಸಾಧನೆ ಮಾಡಲು ಸಹಕರಿಸಬೇಕೆಂದು ಹೇಳಿದ ಅವರು ಈಗಾಗಲೇ ತಮ್ಮ ಸಂಸ್ಥೆಯಲ್ಲಿ ಅನಾಥ,ಅಂಧ ಮತ್ತು ಬುದ್ದಿಮಾಂದ್ಯರಾದ 200 ಮಕ್ಕಳಿದ್ದು ಇಂತಹ ಮಕ್ಕಳಿದ್ದಲ್ಲಿ ತಮ್ಮ ಮಡಿಲಿಗೆ ಹಾಕುವಂತೆ ಕೇಳಿಕೊಂಡರು. ಸಮಾಜದ ಜಿಲ್ಲಾದ್ಯಕ್ಷರಾದ ಬಿ.ಸಿ. ಉಮಾಪತಿಯವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಥತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಯುವ ಘಟಕದ ಸ್ವರೂಪ್ ಅಂಗಡಿ, ಶಿವಕುಮಾರ್ ಹೊಸ್ಕೆರೆ, ಸುರೇಶ್ ಹಡ್ಲಿಗೇರೆ, ಚಂದ್ರಶೇಖರ್ ನೂಲ,ನೌಕರ ಘಟಕದ ಶ್ರೀಧರ್,ಕುಬೇರಪ್ಪ, ಸುರೇಶ,ದೇವರಾಜ್, ಮಹಿಳಾ ಘಟಕದ ಶ್ರೀಮತಿ ಸುಷ್ಮಾ ಪಾಟಿಲ್, ಶ್ರೀಮತಿ ವೀಣಾನಟರಾಜ್ ಬೆಳ್ಳೂಡಿ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀಮತಿ ಮೀನಾ ಪ್ರಸಾದ ಮತ್ತು ಶ್ರೀಮತಿ ಸುಜಾತ ಪ್ರಾರ್ಥಿಸಿದರು, ಜಿಲ್ಲಾ ಯುವ ಘಟಕದ ಅದ್ಯಕ್ಷ ಶಿವಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರ್ ಹುಂಬಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಮ್ಮುವಿನಲ್ಲಿ ವೀರ ಮರಣವನ್ನಪ್ಪಿದ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ನಿವೃತ್ತ ಯೋಧ ಮಲ್ಲನಗೌಡ ಪಾಟಿಲ್,  ಅಂಧ ದಂಪತಿಗಳು ಮತ್ತು ಸಾಧಕರಾದ ವೀರೇಶ್ ಸಂಗಡಿ ಮತ್ತು ಶ್ರೀಮತಿ ಅಶ್ವಿನಿ ಅಂಗಡಿ ಇವರನ್ನು ಸನ್ಮಾನಿಸಲಾಯಿತು

Back to Top