ಜನವರಿ 22 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಅಯೋದ್ಯೆಯಲ್ಲಿ ಶ್ರೀರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮತ್ತು ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರಿಗೆ ಶ್ರೀರಾಮ ಮಂದಿರ ಪ್ರತಿಷ್ಟಾನ ಟ್ರಸ್ಟ್, ನವರು ಆಹ್ವಾನ ನೀಡಿದ್ದಾರೆ. ಜಗದ್ಗುರುಗಳು ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಶ್ರೀ ಪೀಠದ ಆಡಳಿತಾಧಿಕಾರಿ ಡಾ.ರಾಜ್ ಕುಮಾರ್ ತಿಳಿಸಿದ್ದಾರೆ.
ದಿನಾಂಕ : 29-12-2023
ಇವರಿಗೆ,
ಸಂಪಾದಕರು
ಕನ್ನಡ ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮ.
ಮಾನ್ಯರೆ,
ದಿನಾಂಕ 26-12-2023ರಂದು ನಡೆದ ಪಂಚಮಸಾಲಿ ಜಗದ್ಗುರು ಪೀಠದ ಟ್ರಸ್ಟಿನ ಸಭೆಯಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮೀಜಿಯವರ ಸಾನಿಧ್ಯದಲ್ಲಿ ಹಾಗೂ ಶ್ರೀಪೀಠದ ಪ್ರಧಾನ ಧರ್ಮದರ್ಶಿಗಳಾದ ಶ್ರೀ ಬಿ. ಸಿ. ಉಮಪತಿಯವರ ಅಧ್ಯಕ್ಷತೆಯಲ್ಲಿ ಮತ್ತು ಶ್ರೀ ಪೀಠದ ಆಡಳಿತಾಧಿಕಾರಿಗಳಾದ ಶ್ರೀ ಎಚ್.ಪಿ. ರಾಜಕುಮಾರರವರ ನೇತೃತ್ವದಲ್ಲಿ ಶ್ರೀ ಪೀಠದ . ಎಲ್ಲಾ ಧರ್ಮದರ್ಶಿಗಳು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳ ನಡೆದ ಸಭೆಯಲ್ಲಿ ಈ ಬಾರಿ ರಾಜ್ಯದಲ್ಲಿ ಬರಗಾಲ ಇರುವುದು ಹಾಗೂ ನಮ್ಮ ಸಮಾಜವು ಕೃಷಿ ಪ್ರಧಾನ ರೈತಾಪಿ ವರ್ಗ ಆಗಿರುವುದರಿಂದ ಜನರು ಸಂಕಷ್ಟದಲ್ಲಿ ಇದ್ದಾರೆ ಆದ್ದರಿಂದ “ಹರ ಜಾತ್ರಾ ಮಹೋತ್ಸವ”ವನ್ನು ಈ ವರ್ಷ ಅತ್ಯಂತ ಸರಳರೀತಿಯಲ್ಲಿ 2024 ಜನವರಿ 14 ಮತ್ತು 15 ರಂದು “ಹರ ಜಾತ್ರಾ ಮಹೋತ್ಸವ”ವನ್ನು ಶ್ರೀಪೀಠದಲ್ಲಿ ಸರಳವಾಗಿ ಧಾರ್ಮಿಕ ರೂಪದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಸರಳ “ಹರ ಜಾತ್ರಾ ಮಹೋತ್ಸವದ ಕಾರ್ಯಕ್ರಮ ವಿವರಗಳನ್ನು ಮುಂದಿನ ದಿನಗಳಲ್ಲಿ ಸಮಾಜ ಬಾಂಧವರಿಗೆ ತಿಳಿಸುತ್ತೇವೆ ಎಂದು ಈ ಮೂಲಕ ಶ್ರೀಪೀಠದ ಆಡಳಿತಾಧಿಕಾರಿಗಳಾದ ಶ್ರೀ ಎಚ್ ಪಿ ರಾಜಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
(ಈ ಸುದ್ದಿಯನ್ನು ತಮ್ಮ ಪತ್ರಿಕೆಗಳಲ್ಲಿ ರಾಜ್ಯದ ಸುದ್ದಿಯಾಗಿ ಪ್ರಕಟವಾಗುವಂತೆ ಮಾಡಲು ಈ ಮೂಲಕ ವಿನಂತಿ)
ವಂದನೆಗಳೊಂದಿಗೆ
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪರವಾಗಿ
ಶ್ರೀ ಎಚ್. ಪಿ. ರಾಜಕುಮಾರ್
ಶ್ರೀಪೀಠದ ಆಡಳಿತಾಧಿಕಾರಿಗಳು


ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾದ್ಯಕ್ಷರಾದ ಶ್ರೀ ಜಿ ಪಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕಾಧ್ಯಕ್ಷರ ಸಮ್ಮುಖದಲ್ಲಿ ಸಂಘಟನಾತ್ಮಕ ಸಭೆಯ ಯಶಸ್ವಿಯಾಗಿ ಜರುಗಿತು.
ಈ ಸಂಧರ್ಭದಲ್ಲಿ ಪ್ರಧಾನ ಧರ್ಮದರ್ಶಿ ಶ್ರೀ ಬಿ ಸಿ ಉಮಾಪತಿಯವರು,ಶ್ರೀ ಬಾವಿ ಬೆಟ್ಟಪ್ಪನವರು,ಶ್ರೀ ಬಸವರಾಜ್ ದಿಂಡೂರುರವರು ಹಾಗೂ ಶ್ರೀಪೀಠದ ಧರ್ಮದರ್ಶಿಗಳು,ಆಡಳಿತಾಧಿಕಾರಿ ಶ್ರೀ ಡಾ.ರಾಜಕುಮಾರ ಅವರು,ಸಮುದಾಯದ ಹಿರಿಯರು,ಮಹಿಳಾ ಘಟಕದವರು,ಯುವ ಘಟಕದವರು ಉಪಸ್ಥಿತರಿದ್ದರು.

