ಹರಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜ. 14, 15 ರಂದು ಆಯೋಜಿಸಿದ್ದ ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ
ಹರಿಹರ ಗುರುಪೀಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಹಾಗೂ ದೇಶದಲ್ಲಿ ಓಮಿಕ್ರಾನ್ ಭೀತಿ ಜತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿಯಾವಳಿ ಪಾಲನೆ ಹಾಗೂ ಜನತೆಯ ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಂದೂಡುವ ತೀರ್ಮಾನವನ್ನು ಇಂದು ಗುರುಪೀಠದಲ್ಲಿ ನಡೆದ ಸಮುದಾಯದ ಮುಖಂಡ ಸಭೆ ಕೈಗೊಂಡಿದೆ ಎಂದು ತಿಳಿಸಿದರು.
ಹರಿಹರ ಪೀಠದ ನಮ್ಮ ಹರಕ್ಷೇತ್ರದಲ್ಲಿ ಹರಜಾತ್ರೆ ಆಯೋಜಿಸುತ್ತಾ ಬರಲಾಗಿದೆ. ಆದರೆ ಓಮಿಕ್ರಾನ್ ಭೀತಿ ಹೆಚ್ಚಿದೆ, ಸರಕಾರ ಕೂಡ ಹಲವು ನಿಯಮಾವಳಿ ರೂಪಿಸಿ ನಿಬರ್ಂಧ ಹೇರಿದೆ. ನಮ್ಮ ಪೀಠ ಸರಕಾರದ ಜತೆ ಮತ್ತು ಜನರ ಜತೆ ಇರಲಿದೆ. ಹಾಗಾಗಿ ತಾತ್ಕಾಲಿಕ ಮುಂದೂಡಿಕೆಯ ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿನ ಹಾವಳಿ ಕಡಿಮೆಯಾದ ನಂತರ ಮುಂದಿನ ಹರಜಾತ್ರೆಯ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.
ಜಾತ್ರೆ ಎಂದರೆ ನೂರಾರು ವರ್ಷಗಳ ಇತಿಹಾಸವಿರುವ ಮಠಗಳಲ್ಲಿ ನಡೆಯುವ ತೇರು, ರಥೋತ್ಸವದ ಮಾದರಿ ನಮ್ಮ ಹರಜಾತ್ರೆಯಲ್ಲಿ ಇರುವುದಿಲ್ಲ.ಭಕ್ತರು, ಸಮುದಾಯವನ್ನು ಒಗ್ಗೂಡಿಸಲು ಜಾತ್ರೆ ಪದವನ್ನು ಮಾತ್ರೆ ತೆಗೆದುಕೊಂಡಿದ್ದೇವೆ. ಸಮಕಾಲೀನ ವಿಷಯಗಳ ಚರ್ಚೆ ಹರಜಾತ್ರೆಯಲ್ಲಿ ನಡೆಯಲಿದೆ. ಈ ಬಾರಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಉದ್ಯೋಗ ನೀಡುವವರು ಮತ್ತು ಪಡೆಯುವವರ ಸೇರಿ ಉದ್ಯೋಗ ಮೇಳ ಹೀಗೆ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಹರಮಾಲೆ ಸಂಕಲ್ಪ ಸಮರ್ಪಣೆ
ಹರಜಾತ್ರೆ ಹಿನ್ನೆಲೆ ಹರಮಾಲೆ ಅಯೋಜಿಸಲಾಗಿತ್ತು, ಹಲವಾರು ಜನ 21 ದಿನದ ಹಿಂದೆ ಹರಮಾಲೆ ಧರಿಸಿದ್ದರು. ಜ. 14 ರಂದು ಇಲ್ಲಿಗೆ ಆಗಮಿಸುವ ಮಾಲಾಧಾರಿಗಳು ‘ಹರಮಾಲೆ ಸಂಕಲ್ಪ ಸಮರ್ಪಣೆ’ ಮಾಡಲಾಗುತ್ತಿತ್ತು. ಜಾತ್ರೆ ಮುಂದೂಡಿರುವುದರಿಂದ ಮಾಲಾಧಾರಿಗಳು ಅವರವರ ಮನೆಯಲ್ಲಿಯೇ ಹರಮಾಲೆ ಸಂಕಲ್ಪ ಸಮರ್ಪಣೆ ಮಾಡಬೇಕು. ಇನ್ಮುಂದೆ ರುದ್ರಾಕ್ಷಿ ಮಾಲೆ ತೊಟ್ಟು ಪ್ರತಿದಿನ ಹರಮಂತ್ರ ಪಠಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
ಹರಜಾತ್ರೆ ಆಹ್ವಾನ ಪತ್ರಿಕೆ ನೋಡಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಳಿ ಮಠ, ಪಂಚಮಸಾಲಿ ಸಮಾಜ ಹಾಗೂ ನಮ್ಮ ಯೋಗದ ಬಗ್ಗೆ ಮಾಹಿತಿ ಪಡೆದು ಕರೆ ಮಾಡಿದ್ದರು. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಸಂಸತ್ ಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ನಾವು ಅವರಿಗೆ ನಮ್ಮ ಸಮಾಜದ ಬೆಳವಡಿ ರಾಣಿ ಮಲ್ಲಮ್ಮ ಕೆಳದಿ ರಾಣಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ,ದಂಡಿ ಸತ್ಯಾಗ್ರಹದಲ್ಲಿ ಮಹಾತ್ಮಾಗಾಂಧೀಜಿ ಜತೆಯಲ್ಲಿದ್ದ ನಮ್ಮ ಮೈಲಾರ ಮಹಾದೇವ ಇವರೆಲ್ಲಾ ಪಂಚಮಸಾಲಿ ಸಮಾಜದವರು, ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ತಾವು ಮಾಹಿತಿ ನೀಡಿದೆ. ಹರಜಾತ್ರೆ ಮುಂದೂಡಲು ಅವರು ಸಲಹೆ ನೀಡಿದರು, ಮುಂದಿನ ಜಾತ್ರೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ನಾಗನಗೌಡ್ರು,ಪಿ ಡಿ ಶಿರೂರ, ಚಂದ್ರಶೇಖರ ಪೂಜಾರ,ಸೋಮನಗೌಡ ಪಾಟೀಲ,ಮಹೇಶ ಹಾವೇರಿ,ಪ್ರಕಾಶ್ ಪಾಟೀಲ,ಬಸವನಗೌಡ್ರು ತೊಂಡಿಹಾಳ, ಶ್ರೀಮತಿ ವಸಂತಾ ಹುಲ್ಲತ್ತಿ,ಸುನಂದಮ್ಮ,ಗೀತಮ್ಮ ಇತರರು ಇದ್ದರು.
ವಚನಾನಂದ ಶ್ರೀ ಗಳಿಗೆ ಉಪರಾಷ್ಟ್ರಪತಿ ಗಳಿಂದ ಸಂಸತ್ ಭವನಕ್ಕೆ ಬರುವಂತೆ ಆಹ್ವಾನ ಪೋನ್ ಮಾಡಿ ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಸಂಸತ್ ಭವನಕ್ಕೆ ಬರುವಂತೆ ಆಹ್ವಾನಿಸಿದ ಉಪರಾಷ್ಟ್ರಪತಿ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಜಗದ್ಗುರು ಪೀಠ ವಚನಾನಂದ ಶ್ರೀ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಂದ ಸ್ವಾಮೀಜಿಗಳ ಯೋಗಸಾಧನೆ ಹಾಗೂ ಜಗದ್ಗುರುಪೀಠ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು.
ಆಜಾದಿ ಅಮೃತ್ ಮಹೋತ್ಸವ ಹಿನ್ನೆಲೆ ಪಂಚಮಸಾಲಿ ಸಮಾಜದ ಕೊಡುಗೆ ಬಗ್ಗೆ ಶ್ರೀ ಗಳಿಂದ ಮಾಹಿತಿ ಪಡೆದ ಉಪರಾಷ್ಟ್ರಪತಿ.
ಹರಜಾತ್ರೆ ಮುಂದೂಡಲು ನಾಯ್ಡು ಸಲಹೆ
ಸದ್ಯ ದೇಶದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿದೆ. ಇದೇ ತಿಂಗಳು 14 ಮತ್ತು 15 ರಂದು ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆಯಲಿದ್ದ ಹರಜಾತ್ರೆ ಮುಂದೂಡಲು ಸಲಹೆ ನೀಡಿದ ಉಪರಾಷ್ಟ್ರಪತಿ.
ಹೆಚ್ಚು ಜನ ಸೇರುವುದರಿಂದ. ತೊಂದರೆ ಆಗುವ ಸಾದ್ಯತೆ ಇದೆ. ಓಮಿಕ್ರಾನ್ ಭೀತಿ ಕಡಿಮೆ ಆಗುವ ವರೆಗೆ ಹರಜಾತ್ರೆ ಮುಂದೂಡಲು ಶ್ರೀಗಳಿಗೆ ನಾಯ್ಡು ಸಲಹೆ.
ಹರಿಹರಕ್ಕೆ ಬರಲಿರುವ ವೆಂಕಯ್ಯ ನಾಯ್ಡು
ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಹರಜಾತ್ರೆಯಲ್ಲಿ ಪಾಲ್ಗೊಳ್ಳಲು ಹರಿಹರಕ್ಕೆ ಬರುವುದಾಗಿ ಶ್ರೀ ಗಳಿಗೆ ಹೇಳಿದ ನಾಯ್ಡು.
ಪಂಚಮಸಾಲಿ ಸಮಾಜ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ವಚನಾನಂದ ಶ್ರೀಗಳಿಂದ ಮಾಹಿತಿ ಪಡೆದ ವೆಂಕಯ್ಯ ನಾಯ್ಡು.
ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಹೀಗೆ ಪಂಚಮಸಾಲಿ ಸಮಾಜದ ವೀರ ಮಹಿಳೆಯ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ.
ರಾಜ್ಯದಲ್ಲಿ 85ಲಕ್ಷ ಹಾಗೂ ಮಹಾರಾಷ್ಟ್ರ,ತೆಲಂಗಾಣ,ಆಂದ್ರಪ್ರದೇಶ,ತಮಿಳುನಾಡು ಸೇರಿದಂತೆ ದೇಶದಲ್ಲಿ ಒಂದು ಕೋಟಿ 50 ಲಕ್ಷ ಪಂಚಮಸಾಲಿಗಳಿದ್ದಾರೆ ಎಂದು ಉಪರಾಷ್ಟ್ರ ಪತಿಗಳಿಗೆ ಮಾಹಿತಿ ನೀಡಿದ ವಚನಾನಂದ ಶ್ರೀ.
ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿದ ನಿಗದಿತ ಸಮಯಕ್ಕೆ ಹರ ಜಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಶ್ರೀಗಳಿಗೆ ಹೇಳಿದ ಉಪರಾಷ್ಟ್ರಪತಿ.
ಇದೇ ತಿಂಗಳ 14 ಮತ್ತು 15 ರಂದು ಹರಿಹರದ ಹರಕ್ಷೇತ್ರ ಪಂಚಮಸಾಲಿ ಜಗದ್ಗುರು ಪೀಠ ನಡೆಯಲಿದ್ದ ಹರಜಾತ್ರೆ.
ಹರಜಾತ್ರೆ ಗೆ ಆಹ್ವಾನ ನೀಡಿ ಪತ್ರ ತಲುಪಿದ ಹಿನ್ನೆಲೆ ವಚನಾನಂದ ಶ್ರೀಗಳಿಗೆ ಪೋನ್ ಕರೆ ಮಾತನಾಡಿ ಉಪರಾಷ್ಟ್ರಪತಿ.
ಹರಮಾಲೆ ಒಂದು ದೊಡ್ಡ ಸಾಮಾಜಿಕ ಮತ್ತು ಅಧ್ಯಾತ್ಮಿಕ ಕ್ರಾಂತಿಗೆ ಕಾರಣವಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳ ಯುವಕ ಯುವತಿಯರಿಂದ ಅತೀವ ಸ್ಪಂದನೆ ವ್ಯಕ್ತವಾಗುತ್ತಿದೆ. ದಾವಣಗೆರೆ ಮಡಿಕಲ್ ಕಾಲೇಜಿನ ಮತ್ತು ಹರಿಹರ ತಪೋವನದ ಆಯುರ್ವೇದಿಕ್ ಹಾಗೂ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕಾಲೇಜಿನಲ್ಲಿ ಮೆಡಿಕಲ್ ಓದುತ್ತಿರುವ ಹಲವು ವಿದ್ಯಾರ್ಥಿಗಳು ಇಂದು ಹರಪೀಠಕ್ಕೆ ಭೇಟಿ ನೀಡಿ ನಮ್ಮ ಆಶೀರ್ವಾದ ಪಡೆದರು. ಹರಮಾಲೆ ಧಾರಣೆ ಮಾಡಿ ಹರಸಂಕಲ್ಪ ಮಾಡಿದರು. ನಾವು ಅವರಿಗೆಲ್ಲಾ ಹರಮಾಲೆಯ ವಿಧಿವಿಧಾನಗಳನ್ನು ಬೋಧಿಸಿದೆವು. ಅವರ ಆಸಕ್ತಿ, ಭಕ್ತಿ, ಶ್ರದ್ಧೆ ನಮ್ಮನ್ನ ಮೂಕವಿಸ್ಮಿತರನ್ನಾಗಿ ಮಾಡಿತು.
ವಿಶೇಷವೆಂದರೆ ಈ ಮೆಡಿಕಲ್ ವಿದ್ಯಾರ್ಥಿಗಳಲ್ಲಿ ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಗಳೂ ಇದಾರೆ. ಗುಜರಾತ್, ಆಂಧ್ರ, ತಮಿಳುನಾಡು, ಉತ್ತರ ಪ್ರದೇಶದ ವಿದ್ಯಾರ್ಥಿಗಳಿದಾರೆ. ಎಲ್ಲರೂ ಹರಮಾಲಾಧಾರಣೆ ಮಾಡಿ ಹರಸಂಕಲ್ಪ ಮಾಡಿದರು.
ಈ ಯುವ ಶಕ್ತಿಗೆ ಒಳಿತಾಗಲಿ, ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನೂ ಯಶಸ್ವಿಯಾಗಿ ನಿರ್ಮಿಸಲಿ ಎಂದು ನಾವು ಹರಿಹರಾದಿ ಶರಣರಲ್ಲಿ ಪ್ರಾರ್ಥಿಸುತ್ತೇವೆ.
------------------------------