
ಚಿತ್ರದುರ್ಗ ಜಿಲ್ಲಾ ಪಂಚಮಸಾಲಿ ಸಂಘ ಹಾಗೂ ಎಲ್ಲ ತಾಲ್ಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಸಮಾರಂಭವು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಯೋಗಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಚಿತ್ರದುರ್ಗ ಜಿಲಾಧ್ಯಕ್ಷರಾದ ಶ್ರೀ ಶಿವಪ್ರಕಾಶ ಅವರ ಅಧ್ಯಕ್ಷತೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಜಿ.ಪಿ.ಪಾಟೀಲರು ಉದ್ಘಾಟಿಸಿದರು.

ಬ್ಯಾಡಗಿ ತಾಲೂಕಿನ ಪಂಚಮಸಾಲಿ ಸಂಘದ ವತಿಯಿಂದ ಕದರಮಂಡಗಿಯಲ್ಲಿ ಪಿಯುಸಿ ಮತ್ತು ಹತ್ತನೇಯ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ
ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಶಾಸಕರಾದ ಶ್ರೀ ವೀರುಪಾಕ್ಷಪ್ಪ ಬಳ್ಳಾರಿಯವರು,ಜಿಲ್ಲಾಧ್ಯಕ್ಷ ನಾಗರಾಜ್ ಕಡಕೋಳ,ತಾಲೂಕಾ ಅಧ್ಯಕ್ಷ ತಿರುಕಪ್ಪ ಮರಬಸಣ್ಣನ್ನವರು, ಶ್ರೀ ಶಂಕರಗೌಡ ಪಾಟೀಲ,
ಶ್ರೀ ಜಯಣ್ಣ ಶಿರೂರು, ಶ್ರೀಮತಿ ವಸಂತ ಹುಲ್ಲತ್ತಿ,ಶ್ರೀಮತಿ ಗೀತಾ ಕಾಕೋಳ ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.



