ದಿನಾಂಕ 03-02-2022ರಂದು ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋತ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಲಾಯಿತು.
ನಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿಗಳ ಮೀಸಲಾತಿ ಹೋರಾಟ, ರಾಜ್ಯದ ಪ್ರಸ್ತುತ ಬೆಳವಣಿಗೆಗಳು ಹಾಗೂ ಹರಕ್ಷೇತ್ರ ಹರಿಹರದಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮ ಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಕೇಂದ್ರ ಸಾಮಾಜಿಕ ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿರುವ ಇವರು, ದೇಶದ ಮೀಸಲಾತಿ ವ್ಯವಸ್ಥೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ಇದೇ ವೇಳೆ ಸನ್ಮಾನ್ಯ ರಾಜ್ಯಪಾಲರು ಯೋಗಾಭ್ಯಾಸದ ಬಗ್ಗೆ ಹಲವಾರು ಮಾಹಿತಿಗಳನ್ನು ನಮ್ಮಿಂದ ಪಡೆದುಕೊಂಡರು. ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿರುವ ರಾಜ್ಯಪಾಲರನ್ನು ನಮ್ಮ ಹರಕ್ಷೇತ್ರ ಕ್ಕೆ ಭೇಟಿ ನೀಡುವಂತೆ ಮನವಿ ಸಲ್ಲಿಸಲಾಯಿತು.
ಹರಿಹರ ದಲ್ಲಿ ನಡೆಯುತ್ತಿರುವ ತುಂಗಾ ಆರತಿ ಯೋಜನೆ ಯ ಬಗ್ಗೆ ರಾಜ್ಯಪಾಲರು ಮಾಹಿತಿಯನ್ನು ಪಡೆದುಕೊಂಡರು. ಆತ್ಮೀಯ ಸ್ವಾಗತ ನೀಡಿ ಹೃದಯಪೂರ್ವಕವಾಗಿ ಆದರಿಸಿ ನಮ್ಮ ಮಾತುಗಳಿಗೆ ಕಿವಿಯಾದ ರಾಜ್ಯಪಾಲರಿಗೆ ಧನ್ಯವಾದಗಳು
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.
I had the honour of meeting and interacting with His Excellency, Governor of Karnataka state, Sri Thawar Chand Gehlot Ji at his residence-Raj Bhavan,Bangaluru.
We spoke at length about the current affairs of our state and especially our struggle of obtaining reservation for the Panchamsaali community which I have been leading from the front.
We also spoke in detail about the relentless developmental work we have undertaken in Harihara and rest of Karnataka through our Veerashaiva Lingayata Panchamsaali Peetha, Harihara.
I must admit, he is one of the finest statesman I have ever seen. Humble yet clear with his vision.
We the people of Karnataka are fortunate to have him look over us. We wish him the best in all his endeavours. May he be blessed with the Krupa of Mahadeva.
Jagadguru Sri Sri Sri Vachananand Mahaswamiji
Veerashaiva Lingayat Panchamsali Jagadguru Peetha, Harakshetra Harihar.
ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು
ಇಂದು ಸನ್ಮಾನ್ಯ ಉಪರಾಷ್ಟ್ರಪತಿಗಳಾದ ಶ್ರೀ ವೆಂಕಯ್ಯನಾಯ್ಡು ಅವರು ನಮಗೆ ದೂರವಾಣಿ ಮೂಲಕ ಸಂಪರ್ಕಿಸಿ ಬಹಳ ಹೊತ್ತು ತಮ್ಮ ಪ್ರೀತಿ ಹಾಗೂ ಆದರದ ಮಾತುಗಳಿಂದ ಸತ್ಕರಿಸಿದರು. ಅಲ್ಲದೆ, ಓಮಿಕ್ರಾನ್ ಭೀತಿ ಕಡಿಮೆ ಆದ ನಂತರ ಸಂಸತ್ ಭವನಕ್ಕೆ ಆಹ್ವಾನಿಸಿದ್ದು ಹಾಗೆಯೇ ಹರಿಹರ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದು ಬಹಳ ಸಂತಸ ತಂದಿತು.
ಇದೇ ತಿಂಗಳ 14 ಮತ್ತು 15 ರಂದು ಹರಕ್ಷೇತ್ರ ಹರಿಹರದಲ್ಲಿ ಆಯೋಜಿಸಲಾಗಿರುವ ಹರಜಾತ್ರೆಗೆ ಉಪರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರ ತಲುಪಿದ ನಂತರ ಕೇಂದ್ರ ಸಚಿವರಾದ ಪ್ರಹ್ಲಾದ್ ಜೊಶಿ ಅವರಿಂದ ನಮ್ಮ ಬಗ್ಗೆ ಹಾಗೂ ಪಂಚಮಸಾಲಿ ಜಗದ್ಗುರು ಪೀಠದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದರು ಎನ್ನುವುದು ತಿಳಿಯಿತು.
ಅಜಾದಿ ಕಾ ಅಮೃತ್ ಮಹೋತ್ಸವ ಹಿನ್ನಲೆಯಲ್ಲಿ ಪಂಚಮಸಾಲಿ ಸಮಾಜ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ನಮ್ಮಿಂದ ಉಪರಾಷ್ಟ್ರಪತಿಯವರು ಮಾಹಿತಿ ಪಡೆದರು. ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಹೀಗೆ ಪಂಚಮಸಾಲಿ ಸಮಾಜದ ವೀರ ಮಹಿಳೆಯರ ಬಗ್ಗೆಯೂ ಮಾಹಿತಿಯನ್ನು ನೀಡಿದೆವು. ಹಾಗೆಯೇ, ರಾಜ್ಯದಲ್ಲಿ 85ಲಕ್ಷ ಹಾಗೂ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದಲ್ಲಿ ಒಂದು ಕೋಟಿ 50 ಲಕ್ಷ ಪಂಚಮಸಾಲಿಗಳಿರುವ ಬಗ್ಗೆ ಉಪರಾಷ್ಟ್ರಪತಿಗಳಿಗೆ ತಿಳಿಸಲಾಯಿತು.
ಸದ್ಯ ದೇಶದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿದೆ. ಇದೇ ತಿಂಗಳು 14 ಮತ್ತು 15 ರಂದು ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಆಯೋಜಿಸಿರುವ ಹರಜಾತ್ರೆ ಮುಂದೂಡುವಂತೆ ಉಪರಾಷ್ಟ್ರಪತಿಯವರು ಸಲಹೆ ನೀಡಿದ್ದಾರೆ. ಅಲ್ಲದೆ, ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಹರಜಾತ್ರೆಯಲ್ಲಿ ಪಾಲ್ಗೊಳ್ಳಲು ಹರಿಹರಕ್ಕೆ ಬರುವುದಾಗಿ ನಮಗೆ ಭರವಸೆಯನ್ನು ನೀಡಿದ್ದಾರೆ.
ಅವರ ಕಾಳಜಿ ಹಾಗೂ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.
ಹರಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜ. 14, 15 ರಂದು ಆಯೋಜಿಸಿದ್ದ ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ
ಹರಿಹರ ಗುರುಪೀಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಹಾಗೂ ದೇಶದಲ್ಲಿ ಓಮಿಕ್ರಾನ್ ಭೀತಿ ಜತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿಯಾವಳಿ ಪಾಲನೆ ಹಾಗೂ ಜನತೆಯ ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಂದೂಡುವ ತೀರ್ಮಾನವನ್ನು ಇಂದು ಗುರುಪೀಠದಲ್ಲಿ ನಡೆದ ಸಮುದಾಯದ ಮುಖಂಡ ಸಭೆ ಕೈಗೊಂಡಿದೆ ಎಂದು ತಿಳಿಸಿದರು.
ಹರಿಹರ ಪೀಠದ ನಮ್ಮ ಹರಕ್ಷೇತ್ರದಲ್ಲಿ ಹರಜಾತ್ರೆ ಆಯೋಜಿಸುತ್ತಾ ಬರಲಾಗಿದೆ. ಆದರೆ ಓಮಿಕ್ರಾನ್ ಭೀತಿ ಹೆಚ್ಚಿದೆ, ಸರಕಾರ ಕೂಡ ಹಲವು ನಿಯಮಾವಳಿ ರೂಪಿಸಿ ನಿಬರ್ಂಧ ಹೇರಿದೆ. ನಮ್ಮ ಪೀಠ ಸರಕಾರದ ಜತೆ ಮತ್ತು ಜನರ ಜತೆ ಇರಲಿದೆ. ಹಾಗಾಗಿ ತಾತ್ಕಾಲಿಕ ಮುಂದೂಡಿಕೆಯ ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿನ ಹಾವಳಿ ಕಡಿಮೆಯಾದ ನಂತರ ಮುಂದಿನ ಹರಜಾತ್ರೆಯ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.
ಜಾತ್ರೆ ಎಂದರೆ ನೂರಾರು ವರ್ಷಗಳ ಇತಿಹಾಸವಿರುವ ಮಠಗಳಲ್ಲಿ ನಡೆಯುವ ತೇರು, ರಥೋತ್ಸವದ ಮಾದರಿ ನಮ್ಮ ಹರಜಾತ್ರೆಯಲ್ಲಿ ಇರುವುದಿಲ್ಲ.ಭಕ್ತರು, ಸಮುದಾಯವನ್ನು ಒಗ್ಗೂಡಿಸಲು ಜಾತ್ರೆ ಪದವನ್ನು ಮಾತ್ರೆ ತೆಗೆದುಕೊಂಡಿದ್ದೇವೆ. ಸಮಕಾಲೀನ ವಿಷಯಗಳ ಚರ್ಚೆ ಹರಜಾತ್ರೆಯಲ್ಲಿ ನಡೆಯಲಿದೆ. ಈ ಬಾರಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಉದ್ಯೋಗ ನೀಡುವವರು ಮತ್ತು ಪಡೆಯುವವರ ಸೇರಿ ಉದ್ಯೋಗ ಮೇಳ ಹೀಗೆ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಹರಮಾಲೆ ಸಂಕಲ್ಪ ಸಮರ್ಪಣೆ
ಹರಜಾತ್ರೆ ಹಿನ್ನೆಲೆ ಹರಮಾಲೆ ಅಯೋಜಿಸಲಾಗಿತ್ತು, ಹಲವಾರು ಜನ 21 ದಿನದ ಹಿಂದೆ ಹರಮಾಲೆ ಧರಿಸಿದ್ದರು. ಜ. 14 ರಂದು ಇಲ್ಲಿಗೆ ಆಗಮಿಸುವ ಮಾಲಾಧಾರಿಗಳು ‘ಹರಮಾಲೆ ಸಂಕಲ್ಪ ಸಮರ್ಪಣೆ’ ಮಾಡಲಾಗುತ್ತಿತ್ತು. ಜಾತ್ರೆ ಮುಂದೂಡಿರುವುದರಿಂದ ಮಾಲಾಧಾರಿಗಳು ಅವರವರ ಮನೆಯಲ್ಲಿಯೇ ಹರಮಾಲೆ ಸಂಕಲ್ಪ ಸಮರ್ಪಣೆ ಮಾಡಬೇಕು. ಇನ್ಮುಂದೆ ರುದ್ರಾಕ್ಷಿ ಮಾಲೆ ತೊಟ್ಟು ಪ್ರತಿದಿನ ಹರಮಂತ್ರ ಪಠಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
ಹರಜಾತ್ರೆ ಆಹ್ವಾನ ಪತ್ರಿಕೆ ನೋಡಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಳಿ ಮಠ, ಪಂಚಮಸಾಲಿ ಸಮಾಜ ಹಾಗೂ ನಮ್ಮ ಯೋಗದ ಬಗ್ಗೆ ಮಾಹಿತಿ ಪಡೆದು ಕರೆ ಮಾಡಿದ್ದರು. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಸಂಸತ್ ಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ನಾವು ಅವರಿಗೆ ನಮ್ಮ ಸಮಾಜದ ಬೆಳವಡಿ ರಾಣಿ ಮಲ್ಲಮ್ಮ ಕೆಳದಿ ರಾಣಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ,ದಂಡಿ ಸತ್ಯಾಗ್ರಹದಲ್ಲಿ ಮಹಾತ್ಮಾಗಾಂಧೀಜಿ ಜತೆಯಲ್ಲಿದ್ದ ನಮ್ಮ ಮೈಲಾರ ಮಹಾದೇವ ಇವರೆಲ್ಲಾ ಪಂಚಮಸಾಲಿ ಸಮಾಜದವರು, ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ತಾವು ಮಾಹಿತಿ ನೀಡಿದೆ. ಹರಜಾತ್ರೆ ಮುಂದೂಡಲು ಅವರು ಸಲಹೆ ನೀಡಿದರು, ಮುಂದಿನ ಜಾತ್ರೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ನಾಗನಗೌಡ್ರು,ಪಿ ಡಿ ಶಿರೂರ, ಚಂದ್ರಶೇಖರ ಪೂಜಾರ,ಸೋಮನಗೌಡ ಪಾಟೀಲ,ಮಹೇಶ ಹಾವೇರಿ,ಪ್ರಕಾಶ್ ಪಾಟೀಲ,ಬಸವನಗೌಡ್ರು ತೊಂಡಿಹಾಳ, ಶ್ರೀಮತಿ ವಸಂತಾ ಹುಲ್ಲತ್ತಿ,ಸುನಂದಮ್ಮ,ಗೀತಮ್ಮ ಇತರರು ಇದ್ದರು.