email: [email protected] | phone: (08192) 222008 / 224914 | Sri Peetha: 94819 27666

ವಚನಾನಂದ ಶ್ರೀ ಗಳಿಗೆ ಉಪರಾಷ್ಟ್ರಪತಿ ಗಳಿಂದ ಸಂಸತ್ ಭವನಕ್ಕೆ ಬರುವಂತೆ ಆಹ್ವಾನ ಪೋನ್ ಮಾಡಿ ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಸಂಸತ್ ಭವನಕ್ಕೆ ಬರುವಂತೆ ಆಹ್ವಾನಿಸಿದ ಉಪರಾಷ್ಟ್ರಪತಿ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಜಗದ್ಗುರು ಪೀಠ ವಚನಾನಂದ ಶ್ರೀ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಂದ ಸ್ವಾಮೀಜಿಗಳ ಯೋಗಸಾಧನೆ ಹಾಗೂ ಜಗದ್ಗುರುಪೀಠ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು.
ಆಜಾದಿ ಅಮೃತ್ ‌ಮಹೋತ್ಸವ ಹಿನ್ನೆಲೆ ಪಂಚಮಸಾಲಿ‌ ಸಮಾಜದ ಕೊಡುಗೆ ಬಗ್ಗೆ ಶ್ರೀ ಗಳಿಂದ ಮಾಹಿತಿ ಪಡೆದ ಉಪರಾಷ್ಟ್ರಪತಿ.

ಹರಜಾತ್ರೆ ಮುಂದೂಡಲು ನಾಯ್ಡು ಸಲಹೆ
ಸದ್ಯ ದೇಶದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿದೆ‌. ಇದೇ ತಿಂಗಳು 14 ಮತ್ತು 15 ರಂದು ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆಯಲಿದ್ದ ಹರಜಾತ್ರೆ ಮುಂದೂಡಲು ಸಲಹೆ ನೀಡಿದ ಉಪರಾಷ್ಟ್ರಪತಿ.
ಹೆಚ್ಚು ಜನ ಸೇರುವುದರಿಂದ. ತೊಂದರೆ ಆಗುವ ಸಾದ್ಯತೆ ಇದೆ. ಓಮಿಕ್ರಾನ್ ಭೀತಿ ಕಡಿಮೆ ಆಗುವ ವರೆಗೆ ಹರಜಾತ್ರೆ ಮುಂದೂಡಲು ಶ್ರೀಗಳಿಗೆ ನಾಯ್ಡು ಸಲಹೆ.

ಹರಿಹರಕ್ಕೆ ಬರಲಿರುವ ವೆಂಕಯ್ಯ ನಾಯ್ಡು
ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಹರಜಾತ್ರೆಯಲ್ಲಿ ಪಾಲ್ಗೊಳ್ಳಲು ಹರಿಹರಕ್ಕೆ ಬರುವುದಾಗಿ ಶ್ರೀ ಗಳಿಗೆ ಹೇಳಿದ ನಾಯ್ಡು.
ಪಂಚಮಸಾಲಿ ಸಮಾಜ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ವಚನಾನಂದ ಶ್ರೀಗಳಿಂದ ಮಾಹಿತಿ ಪಡೆದ ವೆಂಕಯ್ಯ ನಾಯ್ಡು.
ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಹೀಗೆ ಪಂಚಮಸಾಲಿ ಸಮಾಜದ ವೀರ ಮಹಿಳೆಯ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ.

ರಾಜ್ಯದಲ್ಲಿ 85ಲಕ್ಷ ಹಾಗೂ ಮಹಾರಾಷ್ಟ್ರ,ತೆಲಂಗಾಣ,ಆಂದ್ರಪ್ರದೇಶ,ತಮಿಳುನಾಡು ಸೇರಿದಂತೆ ದೇಶದಲ್ಲಿ ಒಂದು ಕೋಟಿ 50 ಲಕ್ಷ ಪಂಚಮಸಾಲಿಗಳಿದ್ದಾರೆ ಎಂದು ಉಪರಾಷ್ಟ್ರ ಪತಿಗಳಿಗೆ ಮಾಹಿತಿ ನೀಡಿದ ವಚನಾನಂದ ಶ್ರೀ.
ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿದ ನಿಗದಿತ ಸಮಯಕ್ಕೆ ಹರ ಜಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಶ್ರೀಗಳಿಗೆ ಹೇಳಿದ ಉಪರಾಷ್ಟ್ರಪತಿ.
ಇದೇ ತಿಂಗಳ 14 ಮತ್ತು 15 ರಂದು ಹರಿಹರದ ಹರಕ್ಷೇತ್ರ ಪಂಚಮಸಾಲಿ ಜಗದ್ಗುರು ಪೀಠ ನಡೆಯಲಿದ್ದ ಹರಜಾತ್ರೆ.
ಹರಜಾತ್ರೆ ಗೆ ಆಹ್ವಾನ ನೀಡಿ ಪತ್ರ ತಲುಪಿದ ಹಿನ್ನೆಲೆ ವಚನಾನಂದ ‌ಶ್ರೀಗಳಿಗೆ ಪೋನ್ ಕರೆ ಮಾತನಾಡಿ ಉಪರಾಷ್ಟ್ರಪತಿ.

ಹರಮಾಲೆ ಒಂದು ದೊಡ್ಡ ಸಾಮಾಜಿಕ ಮತ್ತು ಅಧ್ಯಾತ್ಮಿಕ ಕ್ರಾಂತಿಗೆ ಕಾರಣವಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳ ಯುವಕ ಯುವತಿಯರಿಂದ ಅತೀವ ಸ್ಪಂದನೆ ವ್ಯಕ್ತವಾಗುತ್ತಿದೆ. ದಾವಣಗೆರೆ ಮಡಿಕಲ್ ಕಾಲೇಜಿನ ಮತ್ತು ಹರಿಹರ ತಪೋವನದ ಆಯುರ್ವೇದಿಕ್ ಹಾಗೂ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕಾಲೇಜಿನಲ್ಲಿ ಮೆಡಿಕಲ್ ಓದುತ್ತಿರುವ ಹಲವು ವಿದ್ಯಾರ್ಥಿಗಳು ಇಂದು ಹರಪೀಠಕ್ಕೆ ಭೇಟಿ ನೀಡಿ ನಮ್ಮ ಆಶೀರ್ವಾದ ಪಡೆದರು. ಹರಮಾಲೆ ಧಾರಣೆ ಮಾಡಿ ಹರಸಂಕಲ್ಪ ಮಾಡಿದರು. ನಾವು ಅವರಿಗೆಲ್ಲಾ ಹರಮಾಲೆಯ ವಿಧಿವಿಧಾನಗಳನ್ನು ಬೋಧಿಸಿದೆವು. ಅವರ ಆಸಕ್ತಿ, ಭಕ್ತಿ, ಶ್ರದ್ಧೆ ನಮ್ಮನ್ನ ಮೂಕವಿಸ್ಮಿತರನ್ನಾಗಿ ಮಾಡಿತು.

ವಿಶೇಷವೆಂದರೆ ಈ ಮೆಡಿಕಲ್ ವಿದ್ಯಾರ್ಥಿಗಳಲ್ಲಿ ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಗಳೂ ಇದಾರೆ. ಗುಜರಾತ್, ಆಂಧ್ರ, ತಮಿಳುನಾಡು, ಉತ್ತರ ಪ್ರದೇಶದ ವಿದ್ಯಾರ್ಥಿಗಳಿದಾರೆ. ಎಲ್ಲರೂ ಹರಮಾಲಾಧಾರಣೆ ಮಾಡಿ ಹರಸಂಕಲ್ಪ ಮಾಡಿದರು.
ಈ ಯುವ ಶಕ್ತಿಗೆ ಒಳಿತಾಗಲಿ, ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನೂ ಯಶಸ್ವಿಯಾಗಿ ನಿರ್ಮಿಸಲಿ ಎಂದು ನಾವು ಹರಿಹರಾದಿ ಶರಣರಲ್ಲಿ ಪ್ರಾರ್ಥಿಸುತ್ತೇವೆ.

 ------------------------------

ಶಿಗ್ಗಾವಿಯಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಕರ್ನಾಟಕ ಘನಸರ್ಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಹಾಕಿದರು.
In the presence of Jagadguru Sri Sri Sri Vachananand Swamiji, Panchamasali Jagadguru Peetha,Harihar Chief Minister Of Karnataka Sri Basavaraj Bommai lays foundation stone for Panchamasali Convention Centre in Shiggaon.

 

----------------------------------------------

Back to Top