
ದಾವಣಗೆರೆ ಜಿಲ್ಲಾ ಪಂಚಮಸಾಲಿ ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ ಶಿವಕುಮಾರ್ (ರಾಜು) ಇವರ ಕಾರ್ಯಕ್ಷಮತೆ ವಿಶಿಷ್ಟ. ಅವರ ಕಣ್ಣಿಗೆ ಮೊದಲು ಗೋಚರಿಸಿದ್ದೆ ಆರ್ಥಿಕವಾಗಿ ಹಿಂದುಳಿದ ಶಾಲಾ ಬಡ ವಿದ್ಯಾರ್ಥಿಗಳು. ದಿನಾಂಕ 20 ಜೂನ್ 2022 ರ ಸೋಮವಾರ, ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ದಿನವೇ ಶಿಕ್ಷಣದಿಂದಲೇ ತಮ್ಮ ಸಮಾಜಸೇವೆಯನ್ನು ಶುಭಾರಂಭ ಮಾಡಬೇಕೆಂದು ಸುಮಾರು 56 ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಶಿಕ್ಷಣಕ್ಕೆ ಅತಿ ಅವಶ್ಯಕವಾದ ನೋಟ್ ಪುಸ್ತಕಗಳನ್ನು ವಿತರಿಸಿದರು. ಈ ಕಾರ್ಯವನ್ನು ಅವರು ಹಿಂದೆಯೂ ಸುಮಾರು ವರ್ಷಗಳಿಂದ ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯವು ಅತ್ಯಂತ ಶ್ಲಾಘನೀಯ, ಭಗವಂತನು ಅವರಿಗೆ ಮುಂದೆಯೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡಲು ಅವಕಾಶವನ್ನು ಕೊಡಬೇಕೆಂದು ಆ ಭಗವಂತನಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
ಈ ಸಂದರ್ಭದಲ್ಲಿ ಅವರೊಂದಿಗೆ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ್ ಹುಂಬಿ, ಸಂಘಟನಾ ಕಾರ್ಯದರ್ಶಿ ಹೊಸಕೇರಿ ಶಿವಕುಮಾರ್, ಬೆಳವನೂರು ನಾಗರಾಜ್, ನಗರ ಯುವ ಘಟಕದ ಅಧ್ಯಕ್ಷರಾದ ಅಂಗಡಿ ಸ್ವರೂಪ್, ಉಪಾಧ್ಯಕ್ಷರಾದ ನವೀನ್ ಎಂ ಎಸ್, ಕಾರ್ಯಾಧ್ಯಕ್ಷರಾದ ಚಂದನ ಪಲ್ಲಗಟ್ಟಿ, ಗ್ರಾಮಸ್ಥರಾದ ಗಣೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ದಿನಾಂಕ 08/06/2022 ರಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ದಾವಣಗೆರೆ ಜಿಲ್ಲಾ ಮತ್ತು ನಗರ, ಹಾಗು ಹೊನ್ನಾಳಿ, ನ್ಯಾಮತಿ,ಹರಿಹರ, ಜಗಳೂರು, ಹರಪನಹಳ್ಳಿ, ರಾಣೆಬೆನ್ನೂರು ತಾಲ್ಲೂಕು ಪಂಚಮಸಾಲಿ ಮಹಿಳಾ ಘಟಕಗಳ
ಹಾಗೂ ಸಮಾಜದ ವಿವಿಧ ಪಂಚಮಸಾಲಿ ಘಟಕಗಳ ಸಹಯೋಗದೊಂದಿಗೆ "ಅಂತಾರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ” ಸಸಿ ನೆಡುವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಷ್ಮ ಪಾಟೀಲ್ ರವರು ವಹಿಸಿದರು, ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ
ನಿವೃತ್ತ ಅಧಿಕಾರಿಗಳಾದ ಶ್ರೀ ಕೆ.ಬಿ.ಕೊಟ್ರೇಶ್ ರವರು ಮಾತನಾಡಿ ಪರಿಸರ ಮಾಲಿನ್ಯದ ಬಗ್ಗೆ ಹಲವು ಮಾಹಿತಿಯನ್ನು ನೀಡಿದರು,


ಹಾಗೂ ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ.ಸಿ. ಉಮಾಪತಿಯವರು, ಸಮಾಜದ ಮಹಿಳಾ ಮುಖಂಡರಾದ ಶ್ರೀಮತಿ ವಸಂತ ಬಸವರಾಜ್ ಹುಲ್ಲತ್ತಿಯವರು, ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್ ದಾವಣಗೆರೆ ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ವೀಣಾ ನಟರಾಜ್ ಬೆಳ್ಳೂಡಿ, ನಗರ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪಾರ್ವತಿ ಶಿವಕುಮಾರ್ ಮತ್ತಿಹಳ್ಳಿ , ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ವಾಣಿ ಶಿವಣ್ಣನವರು, ಎಂ. ದೊಡ್ಡಪ್ಪ, ಜಿಲ್ಲಾ ನೌಕರರ ಘಟಕದ ಅಧ್ಯಕ್ಷರು ಶ್ರೀಧರ, ಕಾರ್ಯದರ್ಶಿ ಬಿ.ಎಸ್. ಶಂಭುಲಿಂಗಪ್ಪ, ಎ. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಎಸ್.ಸಿ. ಕಾಶೀನಾಥ್ , ಮಲ್ಲಿನಾಥ್ . ಎಸ್, ಕೆ.ಸಿ. ಉಮಾಕಾಂತ್, ಜಿ. ಷಣ್ಮುಖಪ್ಪ ಮೇಷ್ಟ್ರು, ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ. ಪ್ರಕಾಶ್ ಪಾಟೀಲ್ ರವರು, ನಗರ ನೌಕರರ ಘಟಕದ ಅಧ್ಯಕ್ಷರು ಸುರೇಶ್, ದಾವಣಗೆರೆ ತಾಲ್ಲೂಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪುರವಂತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೀನಾ ಪ್ರಸಾದ್ ಅಣಪೂರ್ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಸಮಾಜದ ಹಿರಿಯರು ಹಾಗೂ ಎಲ್ಲಾ ಘಟಕಗಳ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.




