email: [email protected] | phone: (08192) 222008 / 224914 | Sri Peetha: 94819 27666

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್.ಸಂತೋಷಜೀ ಅವರನ್ನು ದೆಹಲಿಯಲ್ಲಿ ದಿನಾಂಕ 14-03-2021ರಂದು ಭೇಟಿಯಾಗಿ ಉಭಯಕುಶಲೋಪರಿ ಸಮಾಲೋಚನೆ ನಡೆಸಲಾಯಿತು. ಬಿ.ಎಲ್.ಸಂತೋಷಜೀ ಅವರು ರಾಷ್ಟ್ರೀಯತೆ ಬಗ್ಗೆ ಅಪಾರ ಪ್ರೀತಿ ಉಳ್ಳವರಾಗಿದ್ದಾರೆ. ಅವರನ್ನು ಪ್ರತಿ ಬಾರಿ ಭೇಟಿಯಾದಾಗಲೆಲ್ಲಾ ಒಂದೊಂದು ಹೊಸ ವಿಚಾರದ ಮಂಥನವಾಗುತ್ತದೆ. ಈ ಬಗ್ಗೆ ಅವರು ಹೊಂದಿರುವ ಆಳವಾದ ಜ್ಞಾನವನ್ನು ನಮಗೆ ತಿಳಿಯಪಡಿಸುತ್ತಾರೆ.  ದೇಶ ವಿದೇಶದ ವಿದ್ಯಮಾನಗಳ ಬಗ್ಗೆ ಅವರೊಂದು ಜ್ಞಾನಭಂಡಾರವಿದ್ದಂತೆ. ಅವರ ಬಳಿ ಮಾತನಾಡಿದಷ್ಟೂ ನಮ್ಮ ಜ್ಞಾನ ಹೆಚ್ಚುತ್ತದೆ. ಅವರೊಬ್ಬ ಅಪಾರ ಜ್ಞಾನವನ್ನು ಹೊಂದಿರುವ ತತ್ತ್ವಜ್ಞಾನಿಗಳಾಗಿದ್ದಾರೆ. ಅವರು ರಾಜ್ಯದ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ದೇಶದ ಬಗ್ಗೆ ಅಪಾರ ಚಿಂತನೆಯನ್ನು ಹೊಂದಿದ್ದು, ಸಮಗ್ರ ದೇಶ ಕಟ್ಟುವತ್ತ ಎಲೆ ಮರೆ ಕಾಯಿಯಂತೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇಂತಹ ಜ್ಞಾನಿಯವರ ಜೊತೆಗೆ ಮಾತನಾಡಿದರೆ ಸಾಕು ನಮ್ಮ ಜ್ಞಾನಾರ್ಜನೆಯಾಗುತ್ತದೆ.  ಅವರೊಂದಿಗೆ ನಾವು ನಡೆಸಿದ ಮಾತುಕತೆ ವೇಳೆ ಹತ್ತು ಹಲವಾರು ವಿಚಾರಗಳನ್ನು ಹಂಚಿಕೊಂಡೆವು. ಅವರಿಂದ ರಾಷ್ಟ್ರದ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಂಡೆವು. ಇತ್ತೀಚಿನ ದಿನಗಳಲ್ಲಿ ನಾವು ಕೈಗೊಂಡಂತಹ ಕೆಳದಿಯ ಚೆನ್ನಮ್ಮ, ಬೆಳವಡಿ ಮಲ್ಲಮ್ಮ,ಕಿತ್ತೂರು ರಾಣಿ ಚೆನ್ನಮ್ಮ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಿದೆವು. ಇದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಆಜಾದಿ ಕಾ ಅಮೃತ ಮಹೋತ

ದಿನಾಂಕ 14-03-2021ರಂದು ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರನ್ನು ದೆಹಲಿಯ ಉಪರಾಷ್ಟ್ರಪತಿಯವರ ನಿವಾಸದಲ್ಲಿ ಭೇಟಿ ಆದೆವು.ಅವರ ಇಂದಿನ ಭೇಟಿ ಬಹಳ ಪ್ರಫುಲ್ಲದಾಯಕವಾಗಿತ್ತು. ನಮ್ಮನ್ನ ನೋಡಿದ ಕೂಡಲೇ ಅವರು ಬಹಳ ಖುಷಿ ಪಟ್ಟರು.ಕೆಲವು ವರ್ಷಗಳ ಹಿಂದೆ ಅವರನ್ನು ಬೇಟಿಯಾದ ಸಂಧರ್ಭವನ್ನು ಮತ್ತು ಕೆಲವು ದಿನಗಳ ಹಿಂದೆ ನಿಮ್ಮ ಜೊತೆ ಮಾತನಾಡಿರುವುದನ್ನು ಮೆಲುಕು ಹಾಕಿದರು.ನೀವು ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆಸಿದ್ಧಿ ಹಾಗೂ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾಗಿದ್ದನ್ನು ಬಗ್ಗೆ ಕೇಳಿದ್ದೇನೆ.ತುಂಬಾ ಸಂತಸ ಅಂತ ಪ್ರೀತಿಯಿಂದ ಮಾತಾಡಿದರು. ಯೋಗ, ಆಧ್ಯಾತ್ಮದ ಬಗ್ಗೆ ಉಪರಾಷ್ಟ್ರಪತಿಗಳಿಗೆ ಅತೀವ ಜ್ಞಾನವಿದೆ. ಆ ಕುರಿತು ನಮ್ಮ ಜೊತೆ ವಿಸ್ತೃತವಾಗಿ ಚರ್ಚಿಸಿದರು. ಜೂನ್ ೨೧ಕ್ಕೆ ಜಗತ್ತಿನೆಲ್ಲೆಡೆ ಆಚರಿಸುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತೂ ಮಾತನಾಡಿದರು. ನಮ್ಮೊಂದಿಗೆ ನವದೆಹಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ನಿರ್ದೇಶಕರಾದ ಶ್ರೀ ಡಾ.ಈಶ್ವರ ಬಸವರೆಡ್ಡಿ ಉಪಸ್ಥಿತರಿದ್ದರು.
ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರು ಸರಳ- ಸಜ್ಜನರು. ರಾಜಕೀಯ ಮುತ್ಸದ್ಧಿಗಳು. ನಮ್ಮ ಪಕ್ಕದ ಆಂಧ್ರಪ್ರದೇಶದವರು. ಕನ್ನಡಿಗರನ್ನು ಕಂಡರೆ ಅಪಾರ ಪ್ರೀತಿ ಗೌರವ. ಅವರಿಗೆ ಹರಿಹರಾದಿ ಶರಣರು ಹೆಚ್ಚಿನ ಆರೋಗ್ಯ ಭಾಗ್ಯ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.

Back to Top